ಕಂದಾಯ ಇಲಾಖೆಯಿಂದ ಹೊಸ ನೇಮಕಾತಿ ಅಧಿಸೂಚನೆ: ಕರ್ನಾಟಕ ವಿಶೇಷಾಧಿಕಾರಿ & ಸಕ್ಷಮ ಪ್ರಾಧಿಕಾರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: Karnataka Revenue Dept. Notification 2023
ಕಂದಾಯ ಇಲಾಖೆ, ವಿಶೇಷಾಧಿಕಾರಿ & ಸಕ್ಷಮ ಪ್ರಾಧಿಕಾರ (ಐಎಂಎ ಹಾಗೂ ಇತರೆ ವಂಚನೆ ಪ್ರಕರಣಗಳು) ಯವರ ಸೂಚನೆಯ ಮೇರೆಗೆ, ಈ ಕಛೇರಿಗೆ ಕೆಳಕಂಡ ಹುದ್ದೆಗಳಿಗೆ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ಆಸಕ್ತ & ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ರೆಸ್ಯೂಮ್ ಅನ್ನು ಕಛೇರಿ ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ ಸಲ್ಲಿಸುವುದು.
ವಿಶೇಷಾಧಿಕಾರಿ & ಸಕ್ಷಮ ಪ್ರಾಧಿಕಾರ ಕಛೇರಿ ಯಲ್ಲಿ ಲಭ್ಯವಿರುವ ಕೆಳಗೆ ನೀಡಲಾಗಿರುವ ಹುದ್ದೆಗಳ ನೇಮಕಾತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯ ಹೆಚ್ಚಿನ ವಿವರಗಳನ್ನು ಇಲ್ಲಿ ಪಡೆಯಿರಿ.
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ಮೇಲೆ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.
ಹುದ್ದೆಗಳ ವಿವರ/ Post Details:
ಇಲಾಖೆ/ ಸಂಸ್ಥೆ: ವಿಶೇಷಾಧಿಕಾರಿ & ಸಕ್ಷಮ ಪ್ರಾಧಿಕಾರಿಯವರ ಕಾರ್ಯಾಲಯ
ಹುದ್ದೆಯ ಹೆಸರು: ಕಾನೂನು ಅಧಿಕಾರಿ
ಒಟ್ಟು ಹುದ್ದೆಗಳು : 01 ಹುದ್ದೆ
ಕೆಲಸದ ಸ್ಥಳ: ಬೆಂಗಳೂರು
ವೇತನ/ Salary:
ಪ್ರತಿ ತಿಂಗಳು ಕ್ರೂಡಿಕೃತ ವೇತನ ರೂ. 75000/- ದಿಂದ 80000/- ದವರೆಗೆ ನೀಡಲಾಗುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ/ Education Qualification:
ಅಂಗೀಕೃತ ವಿಶ್ವವಿದ್ಯಾಲಯದಿಂದ LLB/ LLM ಪದವಿಯನ್ನು ಹೊಂದಿರಬೇಕು & ಕರ್ನಾಟಕದ ಬಾರ್ ಕೌನ್ಸಿಲ್ ನಲ್ಲಿ ನೊಂದಾವಣೆ ಹೊಂದಿರಬೇಕು. ಕರ್ನಾಟಕದ ಹೈಕೋರ್ಟಿನಲ್ಲಿ ಕನಿಷ್ಟ 5 ವರ್ಷಗಳ ಕಾಲ ವಕೀಲರಾಗಿ ಕಾರ್ಯನಿರ್ವಹಿಸಿದ ಅನುಭವ ಇರಬೇಕು.
ಅರ್ಜಿ ಶುಲ್ಕ/ -Application fees:
ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
Age limit/ ವಯೋಮಿತಿ:
ಅಧಿಸೂಚನೆಯ ಪ್ರಕಾರ ನಿಗದಿಪಡಿಸಿದ ವಯೋಮಿತಿಯನ್ನು ಪೂರೈಸಿರಬೇಕು.
ಆಯ್ಕೆ ವಿಧಾನ/ Selection Procedure :
ಲಿಖಿತ ಪರೀಕ್ಷೆ/ ಕೌಶಲ್ಯ ಪರೀಕ್ಷೆ/ ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ/ Application Submission Method:
ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿ (ಐಎಂಎ ಹಾಗೂ ಇತರೆ ಕಂಪನಿ ವಂಚನೆ ಪ್ರಕರಣಗಳು) ಯವರ ಸೂಚನೆಯ ಮೇರೆಗೆ, ಈ ಕಛೇರಿಗೆ ವಿವಿಧ ಸರ್ಕಾರದ ಆದೇಶಗಳಂತೆ ಮಂಜೂರಿಯಾಗಿ ನೇಮಕಾತಿ ಆಗದೇ ಖಾಲಿ ಇರುವ ಈ ಕೆಳಕಂಡ ಹುದ್ದೆಗಳಿಗೆ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ಒದಗಿಸಲು ಆಸಕ್ತ ಏಜೆನ್ಸಿಗಳಿಂದ / ಆಸಕ್ತ ವೈಯಕ್ತಿಕ ವ್ಯಕ್ತಿಗಳಿಂದ Resume ಆಹ್ವಾನಿಸಲಾಗಿದ್ದು, ದಿನಾಂಕ: 23.06.2023 ರ ಸಂಜೆ 5.00 ಗಂಟೆ ಒಳಗಾಗಿ ಸೂಕ್ತ ಪ್ರಸ್ತಾವನೆಯನ್ನು / Resume ಈ ಕಛೇರಿಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ವಿಶೇಷಾಧಿಕಾರಿ & ಸಕ್ಷಮ ಪ್ರಾಧಿಕಾರಿಯವರ ಕಾರ್ಯಾಲಯ, ಪೋಡಿಯಂ ಬ್ಲಾಕ್, 3ನೇಮಹಡಿ, ವಿಶ್ವೇಶ್ವರಯ್ಯ ಗೋಪುರ, ಬೆಂಗಳೂರು ಇಲ್ಲಿಗೆ ಸಂಪರ್ಕಿಸುವುದು.
IMPORTANT LINKS