Karnataka Central Cooperative Bank Recruitment- Total 52 Posts- 10th Class only – Apply now
ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಧಾರವಾಡ ಇದರಲ್ಲಿ ಖಾಲಿ ಇರುವ 52 ಸಿಪಾಯಿ ಹುದ್ದೆಗಳನ್ನು ಮಾನ್ಯ ನಿಬಂಧಕರು, ಸಹಕಾರ ಇಲಾಖೆ, ಬೆಂಗಳೂರು ಇವರ ಆದೇಶ ಮೇರೆಗೆ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಬೇಕಾದ ವಿಧಾನ, ಅರ್ಜಿ ನಮೂನೆ ಹಾಗೂ ಇನ್ನಿತರ ಮಾಹಿತಿಗಳನ್ನು ಬ್ಯಾಂಕಿನ ವೆಬ್ ಸೈಟ್ www.kccbankdharwad.in ಮೂಲಕ ಪಡೆಯಬಹುದು. ನೇಮಕಾತಿ ಮಾಡಲು ಉದ್ದೇಶಿಸಿರುವ ಹುದ್ದೆಗಳನ್ನು ಕೆಳಗಿನಂತೆ ವರ್ಗಿಕರಿಸಿ ಮೀಸಲಿರಿಸಲಾಗಿದೆ.
ಒಟ್ಟು ಹುದ್ದೆಗಳು 52
(GM- 26, SC- 7, ST-2, Cat 1- 2, 2A-8, 2B-2, 3A-2 & 3B-3)
ವೇತನ ಶ್ರೇಣಿ: ರೂ.12500-250-13000-300-14200-350-15600-400-17200-450-19000-500-21000600-24000 ಮತ್ತು ನಿಯಮಾನುಸಾರ ತುಟ್ಟಿ ಭತ್ಯೆ ಹಾಗೂ ಇತರೆ ಭತ್ಯೆಗಳನ್ನು ನೀಡಲಾಗುವುದು.
ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾಗಿದ್ದು ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು.
ವಯೋಮಿತಿ: ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಲಾದ ಕೊನೆಯ ದಿನಾಂಕಕ್ಕೆ ಕನಿಷ್ಟ 18 ವರ್ಷಗಳು
ಗರಿಷ್ಟ ವಯೋಮಿತಿ
ಸಾಮಾನ್ಯ ವರ್ಗಕ್ಕೆ 35 ವರ್ಷಗಳು,
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 40 ವರ್ಷಗಳು
ಇತರೆ ಹಿಂದುಳಿದ ವರ್ಗಗಳು 38 ವರ್ಷಗಳು,
ಹಾಗೂ ಆಯಾ ವರ್ಗಗಳಿಗೆ ನಿಗದಿತ ಗರಿಷ್ಟ ವಯೋಮಿತಿಗೆ ಅಂಗವಿಕಲರು ಮತ್ತು ವಿಧವೆಯರಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ. ಮತ್ತು ಮಾಜಿ ಸೈನಿಕರಿಗೆ ಅವರು ಸೇನೆಯಲ್ಲಿ ಸಲ್ಲಿಸಿದ ಅವಧಿ ಅಥವಾ ಗರಿಷ್ಟ 10 ವರ್ಷಗಳು ಇದರಲ್ಲಿ ಯಾವುದು ಕಡಿಮೆ ಆಷ್ಟು ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
KMF – MANMUL Recruitment 2022- Apply for 187 Posts
ಆಯ್ಕೆ ವಿಧಾನ:
ಅರ್ಹತಾ ಪರೀಕ್ಷೆಯಲ್ಲಿ (ಎಸ್.ಎಸ್.ಎಲ್.ಸಿ)ಪಡೆದ ಅಂಕಗಳನ್ನು ಪರಿಗಣಿಸಿ,ಅಂಕಗಳ ಶೇಕಡಾವರು ಮೆರಿಟ್ ಆಧಾರದ ಮೇಲೆ 1:5 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು, ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಶೇಕಡಾ 85 ಕ್ಕಿಳಿಸಿ ಉಳಿದ ಪ್ರತಿಶತ 15 ಅಂಕಗಳನ್ನು ಸಂದರ್ಶನಕ್ಕೆ ನೀಡಲಾಗುವುದು , ಸದರಿ ಅಂಕಗಳನ್ನು ಒಟ್ಟು ಸೇರಿಸಿ ಬ್ಯಾಂಕಿಂಗ್ ಆಧಾರದಲ್ಲಿ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳು ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳು ರೂ.500/- ಮತ್ತು
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1/ ಅಂಗವಿಕಲರು/ ಮಾಜಿ ಸೈನಿಕ/ವಿಧವಾ ಅಭ್ಯರ್ಥಿಗಳು ರೂ.250/- ಗಳನ್ನು ನಿಗದಿಪಡಿಸಲಾಗಿದೆ,
ನಿಗದಿತ ಶುಲ್ಕವನ್ನು “ಸದಸ್ಯ ಕಾರ್ಯದರ್ಶಿ, ನೇಮಕಾತಿ ಸಮಿತಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕೆ.ಸಿ.ಸಿ. ಬ್ಯಾಂಕ ಲಿ., ಧಾರವಾಡ”ಈ ಹೆಸರಿನಲ್ಲಿ ಡಿಮ್ಯಾಂಡ್ ಡ್ರಾಫ್ಟ್ (ಡಿ.ಡಿ.) ಪಡೆದು ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು
Indian Post C group Recruitment- Apply Online for 10th holder
ಅರ್ಜಿ ಸಲ್ಲಿಸುವ ವಿಧಾನ:
- ನಿಗದಿತ ಅರ್ಜಿ ನಮೂನೆಯನ್ನು ಬ್ಯಾಂಕಿನ ವೆಬ್ ಸೈಟ್ www.kccbarakdharwad.in ನಿಂದ ಡೌನಲೋಡ ಮಾಡಿಕೊಳ್ಳುವದು,
- ಭರ್ತಿ ಮಾಡಿದ ಅರ್ಜಿ, ದಾಖಲಾತಿಗಳು ಮತ್ತು ಡಿ.ಡಿ. ಯನ್ನು ಲಕೋಟೆಯಲ್ಲಿಟ್ಟು (ಮುಚ್ಚಿದ ಕವರ್) ‘ಸಿಪಾಯಿ ಹುದ್ದೆಗೆ ಅರ್ಜಿ” ಅಂತಾ ನಮೂದಿಸಿ ಸದಸ್ಯ ಕಾರ್ಯದರ್ಶಿ, ನೇಮಕಾತಿ ಸಮಿತಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕೆ.ಸಿ.ಸಿ ಬ್ಯಾಂಕ ಲಿ., ಪ್ರಧಾನ ಕಚೇರಿ, ಸುಭಾಸ ರೋಡ, ಧಾರವಾಡ -580001 ಇವರ ಕಚೇರಿಗೆ ಖುದ್ದಾಗಿ ಅಥವಾ ರಜಿಸ್ಟರ್ ಅಂಚೆ ಮೂಲಕ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 29.01.2022 ರ ಬೆಳಿಗ್ಗೆ 11.00 ಗಂಟೆಯಿಂದ ಮತ್ತು
ಕೊನೆಯ ದಿನಾಂಕ :19.02.2022 ರ ಸಂಜೆ : 05.00 ಗಂಟೆ ವರೆಗೆ ಮಾತ್ರ
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು: (ದಾಖಲಾತಿಗಳನ್ನು ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಿ ಪ್ರತಿಯನ್ನು ಲಗತ್ತಿಸಬೇಕು)
1) ಎಸ್.ಎಸ್.ಎಲ್.ಸಿ ಅಂಕ ಪಟ್ಟಿ.
2) ಸ್ವ ಹಸ್ತಾಕ್ಷರವಿರುವ ಇತ್ತೀಚಿನ 03 ಭಾವಚಿತ್ರಗಳು
3) ಜಾತಿ & ಆದಾಯ ಪ್ರಮಾಣ ಪತ್ರ
4) ಅಭ್ಯರ್ಥಿಗಳು ತಮ್ಮ ವಿಳಾಸ ಸಮರ್ಥಿಸಲು ಅಗತ್ಯ ದಾಖಲಾತಿ ಸಲ್ಲಿಸತಕ್ಕದ್ದು (ಆಧಾರ ಕಾರ್ಡ/ ವೋಟರ್ ಐಡಿ/ ಪ್ಯಾನ್ ಕಾರ್ಡ/ಡ್ರೈವಿಂಗ್ ಲೈಸೆನ್ಸ/ ಸರಕಾರದಿಂದ ಮಾನ್ಯತೆ ಪಡೆದ ಇನ್ನಿತರೆ ಯಾವುದೇ ದಾಖಲಾತಿ)
ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ಬೆಳಿಗ್ಗೆ 10.30 ರಿಂದ 5.30 ರ ವರೆಗೆ ಸಂಪರ್ಕಿಸಬಹುದಾದ ಸಹಾಯವಾಣಿ ಸಂಖ್ಯೆ : 0836-2443365
IMPORTANT LINKS