ಕರ್ನಾಟಕ ಆಯುಷ್ ಇಲಾಖೆಯಲ್ಲಿ CHO, ಅಟೆಂಡರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ- 10ನೇ/ ಯಾವುದೇ ಪದವಿ ಮುಗಿದವರು ಕೂಡಲೇ ಅರ್ಜಿ ಹಾಕಿ
ಕರ್ನಾಟಕ ಆಯುಷ್ ಇಲಾಖೆಯಿಂದ ಹೊಸ ಅಧಿಸೂಚನೆ ಪ್ರಕಟವಾಗಿದ್ದು, ವಿವಿಧ ಆಯುಷ್ ಕಛೇರಿ & ಆಯುರ್ವೇದ ಕೇಂದ್ರಗಳಲ್ಲಿ ಖಾಲಿ ಇರುವ ಸಮುದಾಯ ಆರೋಗ್ಯ ಅಧಿಕಾರಿಗಳು, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಅಟೆಂಡರ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ 1 ವರ್ಷದ ಅವಧಿಗೆ ಅಥವಾ ಖಾಯಂ ಅಧಿಕಾರಿಗಳು ನೇಮಕವಾಗುವವರೆಗೂ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಕ ಮಾಡಲು ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ.
Karnataka Ayush Department has released notification for filling up Community Health Officer, District Program Manager & Peon Posts on contract base for the period of one year. The more details regarding this recruitment can find here. Click the below link for Official notification.
ಕರ್ನಾಟಕ ಆಯುಷ್ ಇಲಾಖೆಯಿಂದ ಹಾವೇರಿ ಜಿಲ್ಲೆಯ ವ್ಯಾಪ್ತಿಯಲ್ಲಿನ ಆಯುಷ್ ಹಾಸ್ಪಿಟಲ್ & ಆಯುಷ್ ಕಛೇರಿ ಸೇರಿದಂತೆ ವಿವಿಧ ಕಡೆ ಲಭ್ಯವಿರುವ ಕೆಳಗೆ ನೀಡಲಾಗಿರುವ ಹುದ್ದೆಗಳ ನೇಮಕಾತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯ ಹೆಚ್ಚಿನ ವಿವರಗಳನ್ನು ಇಲ್ಲಿ ಪಡೆಯಿರಿ.
ಉದ್ಯೋಗ ಮಾಹಿತಿ: ಭಾರತೀಯ ಅಂಚೆ ಪಾವತಿ ಬ್ಯಾಂಕ್ ನಲ್ಲಿ ಖಾಯಂ ನೇಮಕಾತಿ ಅಧಿಸೂಚನೆ
ಹುದ್ದೆಗಳ ವಿವರ/ Post Details:
ಸಮುದಾಯ ಆರೋಗ್ಯ ಅಧಿಕಾರಿಗಳು – 01 ಹುದ್ದೆ |
ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು – 01 ಹುದ್ದೆ |
ಕ್ಷಾರಸೂತ್ರ ಅಟೆಂಡರ್- 01 ಹುದ್ದೆ |
ಒಟ್ಟು ಹುದ್ದೆಗಳು- 03 ಹುದ್ದೆಗಳು |
ಉದ್ಯೋಗ ಮಾಹಿತಿ: ವಿವಿಧ ಜಿಲ್ಲೆಗಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ನೇರ ನೇಮಕಾತಿ
ವೇತನ/ Salary:
ಸಮುದಾಯ ಆರೋಗ್ಯ ಅಧಿಕಾರಿಗಳು – ರೂ. 40000 |
ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು – ರೂ. 30000 |
ಕ್ಷಾರಸೂತ್ರ ಅಟೆಂಡರ್- ರೂ. 11356 |
ಶೈಕ್ಷಣಿಕ ವಿದ್ಯಾರ್ಹತೆ/ Education Qualification:
ಸಮುದಾಯ ಆರೋಗ್ಯ ಅಧಿಕಾರಿಗಳು : –
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ BHMS ಪದವಿ ಮುಗಿಸಿರಬೇಕು.
ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು :–
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (BA/BCOM/ BSC/ BCA/ BBA) ಪದವಿ ಮುಗಿಸಿರಬೇಕು. & ಕಂಪ್ಯೂಟರ್ ಜ್ಞಾನ ಹಾಗೂ ಅನುಭವ ಹೊಂದಿರಬೇಕು.
ಅಟೆಂಡರ್:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಮಾನ್ಯತೆ ಪಡೆದ ಬೋರ್ಡ್ ನಿಂದ ಹತ್ತನೇ ತರಗತಿ ಮುಗಿಸಿರಬೇಕು.
ಉದ್ಯೋಗ ಮಾಹಿತಿ: ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಶುಲ್ಕ/ -Application fees:
ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
Age limit/ ವಯೋಮಿತಿ:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗೆ ಕನಿಷ್ಟ 18 ವರ್ಷ ಪೂರೈಸಿರಬೇಕು & ಗರಿಷ್ಟ 35 ವರ್ಷ ಮೀರಿರಬಾರದು
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ: ಪಜಾ, ಪಪಂ: 05 ವರ್ಷ ಹಿಂದುಳಿದ ವರ್ಗದವರಿಗೆ : 03 ವರ್ಷ ಸಡಿಲಿಕೆ ಇರುತ್ತದೆ,
ಆಯ್ಕೆ ವಿಧಾನ/ Selection Procedure :
ಲಿಖಿತ ಪರೀಕ್ಷೆ/ ಕೌಶಲ್ಯ ಪರೀಕ್ಷೆ/ ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ/ Application Submission Method:
ಇಚ್ಛೆಯುಳ್ಳ ಅಭ್ಯರ್ಥಿಗಳು ದಿನಾಂಕ: 28.02.2023ರಿಂದ ದಿನಾಂಕ: 13.03.2023ರ ವರೆಗೆ (ಕೊನೆಯ ದಿನ) ಸಂಜೆ 05:30ರ ಒಳಗೆ ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿ, ಜಿಲ್ಲಾಡಳಿತ ಭವನ, ‘ಎ’ ಬ್ಲಾಕ್ 2ನೇ ಮಹಡಿ, 8ಬಿ, ದೇವಗಿರಿ, ಹಾವೇರಿ – 581110 ಭರ್ತಿ ಮಾಡಿದ ಅರ್ಜಿಯನ್ನು ಮತ್ತು ವಿದ್ಯಾರ್ಹತೆ ಹಾಗೂ ಮೀಸಲಾತಿ ಮತ್ತು ಇತರೆ ದಾಖಲಾತಿ ನಕಲು ಪ್ರತಿಗಳನ್ನು ಈ ಕಚೇರಿಗೆ ಸಲ್ಲಿಸಲು ಸೂಚಿಸಿದೆ. ನಿಗಧಿತ ಅವಧಿ ಮೀರಿ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ.
ಅರ್ಜಿ ನಮೂನೆ ಪಡೆಯುವ ಸ್ಥಳ: ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿ, ಜಿಲ್ಲಾಡಳಿತ ಭವನ, ‘ಎ’ ಬ್ಲಾಕ್ 2ನೇ ಮಹಡಿ, 8ಬಿ, ದೇವಗಿರಿ, ಹಾವೇರಿ
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿ, ಹಾವೇರಿ ಇಲ್ಲಿಗೆ ಸಂಪರ್ಕಿಸಬಹುದು.
IMPORTANT LINKS